ಸಾಮೂಹಿಕ ದೀಪಾವಳಿ ಸಂಭ್ರಮ ಆಚರಣೆ
ಮಣಿಪಾಲ : ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಮಣಿಪಾಲ ಶಾಂತಿನಗರ ಚೌಡೇಶ್ವರಿ ಕ್ರಿಕೆಟರ್ಸ್ ವತಿಯಿಂದ ಸಾಮೂಹಿಕ ದೀಪಾವಳಿ ಸಂಭ್ರಮವನ್ನು 80 ಬಡಗುಬೆಟ್ಟು ಶಾಂತಿನಗರದ ಸಾರ್ವಜನಿಕ ಗಣೇಶೋತ್ಸವ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ವೈಲೆಟ್ ಫೆಮಿನಾ ಉದ್ಘಾಟಿಸಿದರು. ವಿದ್ವಾನ್ ಸಗ್ರಿ ವೇದವ್ಯಾಸ ಐತಾಳ್ ದೀಪಾವಳಿ ಹಬ್ಬದ ಸಂದೇಶ ನೀಡಿದರು. ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪ ನೀರಿಕ್ಷಕ ಅಬ್ದುಲ್ ಖಾದರ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧಾಕರ್ ಶೆಟ್ಟಿ, ನಾಗರಿಕ ಸಮಿತಿಯ ಸದಸ್ಯ ಕೆ.ಬಾಲಗಂಗಾಧರ ರಾವ್, ಚೌಡೇಶ್ವರಿ ಕ್ರಿಕೆಟರ್ಸ್ ಅಧ್ಯಕ್ಷ ವಿನಯ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ರಾಘವೇಂದ್ರ ರಾವ್ ಶಾಂತಿನಗರ ವಂದಿಸಿದರು. ಶಿಲ್ಪಾಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ವಿನುತಾ ನಾಯಕ್ ಸಹಕರಿಸಿದರು. ಬಳಿಕ ಮೃತ್ತಿಕೆ ಹಣತೆ, ದೀಪದ ಎಣ್ಣೆಯನ್ನು ಉಚಿತವಾಗಿ ವಿತರಿಸಲಾಯಿತು. ಹತ್ತು ಅಡಿ ಎತ್ತರದ ದೀಪಗೋಪುರವನ್ನು ಬೆಳಗಿಸಲಾಯಿತು.