ಕಾಸರಗೋಡು : ಸ್ನೇಹಿತರ ನಡುವೆ ವಾಗ್ವಾದ; ಓರ್ವನ ಕೊಲೆ
ಕಾಸರಗೋಡು : ತಿರುವನಂತಪುರ ನಿವಾಸಿಯೋರ್ವನನ್ನು ತಲೆಗೆ ಬಡಿದು ಕೊಲೆಗೈದ ಘಟನೆ ರವಿವಾರ ರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ತಿರುವನಂತಪುರದ ವಿಜಯನ್ ಮೇಸ್ತ್ರಿ ( 55) ಎಂದು ಗುರುತಿಸಲಾಗಿದೆ. ನಗರ ಹೊರವಲಯದ ಚೆಂಗಳ ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿದೆ. ಜೊತೆಗಿದ್ದ ತಮಿಳುನಾಡು ಮೂಲದ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಜಯನ್ ಹಾಗೂ ಸ್ನೇಹಿತನ ನಡುವೆ ಉಂಟಾದ ವಾಗ್ವಾದ ಕೊಲೆಗೆ ಕಾರಣವೆನ್ನಲಾಗಿದೆ.
ಪಾನಮತ್ತನಾಗಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story