ಕವನ ರಚನೆ : ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಸರಘಟ್ಟ, ಬೆಂಗಳೂರು ಇಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಕವನ ರಚನೆ ಸ್ಪರ್ಧೆಯಲ್ಲಿ ಪುತ್ತೂರಿನ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಕೃತಿ ರೈ ಕೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
“ಗಾಂಧಿ ಜಯಂತಿ ಮತ್ತು ಸ್ವಚ್ ಭಾರತ್ ಅಭಿಯಾನ್” ಎಂಬ ವಿಷಯದ ಬಗ್ಗೆ ಜರುಗಿದ ಈ ಆನ್ಲೈನ್ ಕವನ ರಚನೆ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಕಾಲೇಜುಗಳಿಂದ ವಿದ್ಯಾಥಿಗಳು ಭಾಗವಹಿಸಿದ್ದರು.
ಪ್ರಸ್ತುತ ಪ್ರಥಮ ಬಿ.ಕಾಂ.ನಲ್ಲಿ ವ್ಯಾಸಂಗ ಮಾಡುತ್ತಿರುವ ಕೃತಿ ರೈ ಕೆ, ನಿಡ್ಪಳ್ಳಿ ಲೋಕನಾಥ ರೈ ಡಿ ಮತ್ತು ಕುಶಲ ಕೆ ರೈ ಇವರ ಪುತ್ರಿ.
Next Story