ಮುಂಡಗೋಡ, ನ.22: ಬತ್ತದ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಶಿಡ್ಲಗುಂಡಿಯಲ್ಲಿ ಶನಿವಾರ ಸಂಭವಿಸಿದೆ.
ಬಣವೆಯ ಪಕ್ಕ ಜಮಾಗೊಂಡ ಕಸಕ್ಕೆ ಬೆಂಕಿ ಹಚ್ಚಿದ ಕಿಡಿಯಿಂದ 5 ಎಕರೆಯಲ್ಲಿ ಬೆಳೆದ 2 ಬತ್ತದ ಕಾಳು ಭರಿತ ಬಣವೆಗೆ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.