ನಿವೃತ್ತ ಯೋಧ ಗೋವಿಂದ ಭಟ್ ನಿಧನ
ಕೊಣಾಜೆ : ಮಾಜಿ ಯೋಧ, ಕೊಣಾಜೆ ಗ್ರಾಮದ ಅಸೈಗೋಳಿ ನಿವಾಸಿಯಾಗಿದ್ದ ಕೆ. ಗೋವಿಂದ ಭಟ್ (70) ಅಲ್ಪಕಾಲದ ಅಸೌಖ್ಯದಿಂದ ನ.22ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಭಾರತೀಯ ಭೂಸೇನೆಯಲ್ಲಿ ನಾಯಕ್ ಹುದ್ದೆಯಲ್ಲಿ 17 ವರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಇಲಾಖೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ 17 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ್ದರು. ನಾಣ್ಯ ಸಂಗ್ರಹ ಹವ್ಯಾಸ ಹೊಂದಿದ್ದರು. ಯಕ್ಷಗಾನ ಕಲಾಭಿಮಾನಿ, ಸಂಗೀತ, ಹೋಮಿಯೋಪಥಿ ವೈದ್ಯಕೀಯವನ್ನೂ ಅಭ್ಯಸಿಸಿದ್ದರು. ಅವರು ಪತ್ನಿ, ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story