ನ.29ರಂದು ‘ಸ್ಮರಣ ಸಂಚಿಕೆ’ ಬಿಡುಗಡೆ ಸಮಾರಂಭ
ಉಡುಪಿ, ನ.27: ಉದ್ಯಾವರ ಶ್ರೀವೀರವಿಠ್ಠಲ ದೇವಸ್ಥಾನದ ಶ್ರೀ ಶುಭೋ ದಯ ಟ್ರಸ್ಟ್ನ ಸುವರ್ಣ ಮಹೋತ್ಸವ ಅಂಗವಾಗಿ ಹೊರತರಲಾದ ‘ಸ್ಮರಣ ಸಂಚಿಕೆ’ ಬಿಡುಗಡೆ ಸಮಾರಂಭವು ನ.29ರಂದು ಬೆಳಗ್ಗೆ 11.30ಕ್ಕೆ ದೇವಸ್ಥಾನ ದಲ್ಲಿ ನಡೆಯಲಿದೆ ಎಂದು ಶ್ರೀಶುಭೋದಯ ಟ್ರಸ್ಟ್ ಸದಸ್ಯ ವಿದ್ಯಾವಂತ ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಮಾರಂಭದಲ್ಲಿ ಉದ್ಯಮಿ ನಿತಿನ್ ಕಾಮತ್, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಎಂಐಟಿ ಅಸೋಸಿಯೇಟ್ ಡೈರೆಕ್ಟರ್ ಡಾ. ನಾರಾಯಣ ಶೆಣೈ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ನಾಗೇಶ್ ಕಾಮತ್, ಟ್ರಸ್ಟ್ ಅಧ್ಯಕ್ಷ ರಂಗನಾಥ್ ಶೆಣೈ, ಸದಸ್ಯ ಪ್ರಕಾಶ್ ಶೆಣೈ ಉಪಸ್ಥಿತರಿದ್ದರು.
Next Story