‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನಕ್ಕೆ ಚಾಲನೆ
ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಪ್ರದಾನ
ಮಂಗಳೂರು, ನ.27: ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಪ್ರವಾದಿ ಮುಹಮ್ಮದ್ರ ಸಂದೇಶ ಪ್ರಚಾರ ಅಭಿಯಾನಕ್ಕೆ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಚಾಲನೆ ನೀಡಿದರು. ಇದೇ ಸಂದರ್ಭ ಶೇಖ್ ಅಹ್ಮದ್ ಸರ್ ಪ್ರಶಸ್ತಿಯನ್ನು ಎಡಪದವಿನ ಐಡಿಯಲ್ ಸ್ಕೂಲ್ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ ಪ್ರದಾನಿಸಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ರಫೀಉದ್ದೀನ್ ಕುದ್ರೋಳಿ, ಸಾಮಾಜಿಕ ತಾರತಮ್ಯ ಹಾಗೂ ಪ್ರವಾದಿ ಮುಹಮ್ಮದ್ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿದಾಯ ಫೌಂಡೇಶನ್ ಚೇರ್ಮನ್ ಮನ್ಸೂರ್ ಅಹ್ಮದ್ ಆಝಾದ್, ಮುಸ್ಲಿಂ ಜಸ್ಟೀಸ್ ಫೋರಂ ಅಧ್ಯಕ್ಷ ಡಾ.ಅಮೀರ್ ತುಂಬೆ, ನಂಡೆ ಪೆಂಗಳ್ ಅಭಿಯಾನದ ಅಧ್ಯಕ್ಷ ಎ.ಎಚ್. ನೌಶಾದ್ ಸುರಲ್ಪಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸೀರತ್ ಅಭಿಯಾನದ ಸಂಚಾಲಕ ವಕಾಝ್ ಅರ್ಶಲನ್, ಸಹ ಸಂಚಾಲಕ ಅತಿಖುರ್ರಹ್ಮಾನ್ ಉಪಸ್ಥಿತರಿದ್ದರು. ರಾಹಿಲ್ ರಝಾಕ್ ಸೈಯದ್ ಕಿರ್ಆತ್ ಪಠಿಸಿದರು. ಫಝಲ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.