ಸೆಂಟ್ರಲ್ ಮಾರ್ಕೆಟ್ಗೆ ಹಾನಿ: ದೂರು
ಮಂಗಳೂರು, ನ.27: ಸೆಂಟ್ರಲ್ ಮಾರುಕಟ್ಟೆಯ ಮುಖ್ಯದ್ವಾರಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಹಾಕಲಾಗಿದ್ದ ಬೀಗಗಳನ್ನು ಒಡೆದು, ಒಳಗಡೆ ಅಕ್ರಮ ಪ್ರವೇಶಗೈದು ಹಾನಿ ಮಾಡಿದ ಬಗ್ಗೆ ವರದಿಯಾಗಿದೆ.
ಕೊರೋನ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವ ಹಾಗೂ ನೂತನ ಮಾರುಕಟ್ಟೆ ನಿರ್ಮಾಣ ಮಾಡುವ ಉದ್ದೇಶದಿಂದ ಆ.20ರಿಂದ ಸ್ಥಗಿತಗೊಂಡಿದ್ದ ಸೆಂಟ್ರಲ್ ಮಾರ್ಕೆಟ್ ಬಾಗಿಲುಗಳಿಗೆ ಬೀಗ ಜಡಿಯಲಾಗಿತ್ತು. ಬೀಗ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿರು ವುದು ಬೆಳಕಿಗೆ ಬಂದಿದೆ. ಈ ಕುರಿತು ಮನಪಾ ಉಪ ಆಯುಕ್ತ ಬಿನೋಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story