ಕುಂದಾಪುರ : ವಿದ್ಯಾರ್ಥಿನಿಯರಿಗೆ ಸರಕಾರಿ ಉದ್ಯೋಗ ಮಾಹಿತಿ ಶಿಬಿರ
ಕುಂದಾಪುರ : ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕ ಹಾಗೂ ತೌಹೀದ್ ಎಜುಕೇಶನಲ್ ಟ್ರಸ್ಟ್ ಗಂಗೊಳ್ಳಿ ಇದರ ಜಂಟಿ ಆಶ್ರಯದಲ್ಲಿ, ವಿದ್ಯಾರ್ಥಿನಿಯರಿಗೆ ಸರಕಾರಿ ಉದ್ಯೋಗ ಮಾಹಿತಿ ಶಿಬಿರವನ್ನು ಗಂಗೊಳ್ಳಿಯ ತೌಹೀದ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ನಮ್ಮ ನಾಡ ಒಕ್ಕೂಟ-ಕುಂದಾಪುರ ಘಟಕದ ಅಧ್ಯಕ್ಷರಾದ ಹುಸೈನ್ ಹೈಕಾಡಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ನಮ್ಮ ನಾಡ ಒಕ್ಕೂಟದ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಡಾ. ರಿಝ್ವಾನ್ ಅಹ್ಮದ್ ಕಾರ್ಕಳ ಅವರು ನಮ್ಮ ನಾಡ ಒಕ್ಕೂಟದ ಕಾರ್ಯಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭ ಸರಕಾರಿ ಉದ್ಯೋಗದಲ್ಲಿರುವ ಸಹೋದರಿಯರಾದ ಮಮ್ತಾಝ್ (ಎಡಿಪಿ, ಉಡುಪಿ) ಡಾ. ಶಮ ಶುಕುರ್ (ವ್ಯೆದ್ಯಾಧಿಕಾರಿ, ಹಿರ್ಗಾನ-ಕಾರ್ಕಳ) ಹಾಗೂ ಫರ್ಝನಾ .ಎಮ್ (ಪಿಡಿಒ-ಕಡ್ತಲ ಗ್ರಾಮ ಪಂಚಾಯತ್-ಕಾರ್ಕಳ ತಾಲೂಕು) ಇವರುಗಳಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟದ ಕೋಶಾಧಿಕಾರಿಯಾದ ಅಬ್ದುಲ್ ಹಮೀದ್ ಮೂಡುಬಿದರೆ, ಹೆಬ್ರಿ ಘಟಕದ ಉಪಾಧ್ಯಕ್ಷರಾದ ಮುಸ್ತಾಕ್ ಅಹಮದ್, ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಸಾಕಿರ್ ಹಾವಂಜೆ ,ಬೈಂದೂರು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮಿ, ತೌಹೀದ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಯಾದ ಪಿ.ಮುಹಮ್ಮದ್ ಇಕ್ಬಾಲ್, ಗಂಗೊಳ್ಳಿಯ ಜಾಮಿಯಾ ಮಸೀದಿಯ, ಜಮಾತುಲ್ ಮುಸ್ಲಿಮಿನ್ ಕಮಿಟಿ ಅಧ್ಯಕ್ಷರಾದ ಪಿ.ಎಮ್. ಹಸೈನಾರ್,ಕಾರ್ಯಕ್ರಮದ ಸಂಯೋಜಕರಾದ ಅಬು ಮುಹಮ್ಮದ್ ಶಾಬಾನ್ ಹಂಗಳೂರ್, ಇನಾಯತುಲ್ಲಾ ಶಾಬಂದರಿ ಭಟ್ಕಳ, ರಫೀಕ್ ಗಂಗೊಳ್ಳಿ, ರಫೀಕ್ ವಂಡ್ಸೆ ಉಪಸ್ಥಿತರಿದ್ದರು.
ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರುಗಳಿಗೆ, ವಕೀಲರು ಹಾಗೂ ಸಾಮಾಜಿಕ ಚಿಂತಕರಾದ ಹಂಝತ್ ಹೆಜಮಾಡಿ, ಅಬ್ದುಲ್ ರಝಾಕ್, ನೌಜಲ್ ಮುಲ್ಕಿ, ಅಸ್ಕಾರ್ ಕಿನ್ನಿಗೋಳಿ ಅವರು ವಿದ್ಯಾರ್ಥಿನಿಯರಿಗೆ ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು.
ಮೌಲಾನಾ ಜಮೀರ್ ಅಹ್ಮದ್ ರಶಾದಿ ಅವರು ಕಿರಾತ್ ಪಠಿಸಿ ,ಸಭೆಯ ಕೊನೆಗೆ ದುವಾಗೈದರು. ಹೆಬ್ರಿ ಘಟಕದ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ತೌಹೀದ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಅಕ್ತರ್ ಅಹಮದ್ ಖಾನ್ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿನಿಯರಿಗೆ ಬಸ್ಸಿನ ವ್ಯವಸ್ಧೆ ಮಾಡಲಾಗಿತ್ತು ಹಾಗೂ ತೌಹೀದ್ ಶಿಕ್ಷಣ ಸಂಸ್ಥೆಯ ಇಮ್ತಿಯಾಝ್ ಅಹ್ಮದ್ ಮತ್ತು ಶಾಲಾ ಸಿಬ್ಬಂದಿ ವರ್ಗವು ಸಂಪೂರ್ಣ ಸಹಕಾರ ನೀಡಿದರು.