ಬಂದರ್ನಲ್ಲಿ ನೀರಿಗೆ ಇಳಿದ ಮೀನುಗಾರ ನಾಪತ್ತೆ
ಮಂಗಳೂರು, ಡಿ.4: ಬಂದರ್ನ ಮೀನುಗಾರಿಕಾ ಧಕ್ಕೆಯಲ್ಲಿ ಬೋಟ್ವೊಂದರ ಫ್ಯಾನ್ಗೆ ಸಿಕ್ಕಿದ ಹಗ್ಗವನ್ನು ತೆಗೆಯಲು ನೀರಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಸಂಜೆ ನಾಪತ್ತೆಯಾಗಿದ್ದಾರೆ.
ತಮಿಳುನಾಡಿನ ಅರ್ಜುನ್ (40) ಎಂಬವರೇ ನಾಪತ್ತೆಯಾದ ಮೀನುಗಾರ ಎಂದು ತಿಳಿದುಬಂದಿದೆ.
ಉಳ್ಳಾಲ ರಾಜೇಶ್ ಎಂಬರಿಗೆ ಸೇರಿದ ‘ಸ್ನೇಹ ಶ್ರೇಯಸ್’ ಹೆಸರಿನ ಟ್ರಾಲ್ ಬೋಟು ಮೀನುಗಾರಿಕೆ ಹೊರಡಲು ಸಿದ್ಧವಾಗಿತ್ತು. ಆದರೆ ಬೋಟಿನ ಫ್ಯಾನ್ನ ರೆಕ್ಕೆಗೆ ಹಗ್ಗ ಸಿಕ್ಕಿಕೊಂಡಿದೆ ಎಂಬ ಸಂಶಯದ ಮೇರೆಗೆ ಅದನ್ನು ತೆಗೆಯಲು ಹೋದ ವ್ಯಕ್ತಿ ವಾಪಸಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ತಣ್ಣೀರು ಬಾವಿಯ ಮುಳುಗು ತಜ್ಞರ ತಂಡದ ನೆರವಿನಿಂದ ಅವರ ಪತ್ತೆ ಕಾರ್ಯ ನಡೆಯುತ್ತಿದೆ
Next Story