ಡಿ.8: ದಾರುಸ್ಸಲಾಮ್ ಅಕಾಡಮಿಯ ವಾರ್ಷಿಕ ಸಮ್ಮೇಳನ, ಶಂಸುಲ್ ಉಲಮಾ ಅನುಸ್ಮರಣೆ
ಮಂಗಳೂರು, ಡಿ.6: ನಾಟೇಕಲ್ ಸಮೀಪದ ಮಂಗಳ ನಗರದಲ್ಲಿರುವ ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಮ್ ಅಕಾಡಮಿ ಹಾಗೂ ರಾಜ್ಯ ಮತ್ತು ಜಿಲ್ಲಾ ದಾರಿಮಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿ.8ರಂದು ವಾರ್ಷಿಕ ಸಮ್ಮೇಳನ ಮತ್ತು ಶಂಸುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ಸಮಸ್ತ ಅಧ್ಯಕ್ಷ ಸೈಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಸಂದೇಶ ಭಾಷಣ ಮಾಡಲಿದ್ದಾರೆ
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸೈಯದ್ ಝೈನುಲ್ ಆಬಿದೀನ್ ತಂಙಳ್, ಸೈಯದ್ ಅಲಿ ತಂಙಳ್, ಮಾಹಿನ್ ಉಸ್ತಾದ್, ಖಾಝಿ ಪಾತೂರ್ ಉಸ್ತಾದ್, ಬಂಬ್ರಾಣ ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುರ್ರಝಾಕ್ ಉಸ್ತಾದ್ ಮಲೇಶ್ಯ, ಉಸ್ಮಾನುಲ್ ಫೈಝಿ ಉಸ್ತಾದ್ ಹಾಗೂ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಜಾಮಿಯ ಮಸ್ಜಿದುನ್ನೂರ್ ಅಧ್ಯಕ್ಷ ಮೊಯ್ದಿನ್ ಬಾವುಚ್ಚ ಧ್ವಜಾರೋಹಣ ನೆರವೇರಿಸುವರು. ಬಳಿಕ ಶಂಸುಲ್ ಉಲಮಾ ಕುತುಬ್ ಖಾನವನ್ನು ಶೈಖುನಾ ಮಾಹಿನ್ ಉಸ್ತಾದ್ ಉದ್ಘಾಟಿಸುವರು. ಕಬರ್ ಝಿಯಾರತ್ ಮತ್ತು ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.
ಅಸರ್ ನಮಾಝ್ ಬಳಿಕ ಶೈಖುನಾ ಎ.ವಿ.ಉಸ್ತಾದ್ 'ದಅವಾ ದ ಅಗತ್ಯ' ಎಂಬ ವಿಚಾರದಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಬಳಿಕ ಮಜ್ಲಿಸುನ್ನೂರ್, ಶಂಸುಲ್ ಉಲಮಾ ಮೌಲಿದ್ ನಡೆಯಲಿದೆ. ಸಮಾರೋಪದ ವೇಳೆ ಅಸ್ಸೈಯದ್ ಮುಹಮ್ಮದ್ ಅಲಿ ಶಿಹಾಬುದ್ದೀನ್ ತಂಙಳ್ ಮಲಾಟ್ಟೂರ್ ದುಆ ಮತ್ತು ಪ್ರವಚನ ನೀಡುವರು.
ಶಂಸುಲ್ ಉಲಮಾರ ಹೆಸರಲ್ಲಿ ಖತಮುಲ್ ಕುರ್ ಆನ್, ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ .
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಕಟನೆ ಕೋರಿದೆ.