ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸುಬಾನ್ ಸಾಹೇಬ್
ಕುಂದಾಪುರ, ಜ.4: ಕೋಣಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಇಂದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನಗದು, ಎಟಿಎಂ ಸಹಿತ ಇತರ ದಾಖಲೆಗಳನ್ನು ವಾರೀಸುದಾರರಿಗೆ ನೀಡುವ ಮೂಲಕ ಕಂಡ್ಲೂರು ಝಮ್ಝಮ್ ಮೊಹಲ್ಲಾ ನಿವಾಸಿ ಅಬ್ದುಲ್ ಸುಬಾನ್ ಸಾಹೇಬ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೋಣಿ ಗ್ರಾಮದ ಪೆಟ್ರೋಲ್ ಬಂಕ್ ಬಳಿಯಲ್ಲಿ ಅಬ್ದುಲ್ ಸುಬಾನ್ ಸಾಹೇಬ್ಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸುಮಾರು 8,500ರೂ. ನಗದು, ಎಟಿಎಂ ಕಾರ್ಡ್ ಹಾಗೂ ಇತರ ದಾಖಲಾತಿ ಇರುವ ಪರ್ಸ್ ಪತ್ತೆಯಾಗಿತ್ತು. ವಾರೀಸುದಾರರ ವಿಳಾಸವನ್ನು ಪತ್ತೆ ಹಚ್ಚು ತುಂಬಾ ಶ್ರಮ ಪಟ್ಟರು.
ಬಳಿಕ ಪತ್ತೆಯಾದ ವಾರೀಸುದಾರ ಸತೀಶ್ ಕೊಕ್ಕರ್ಣೆ ಎಂಬವರಿಗೆ ಅವರ ಪಾರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Next Story