ಸುರತ್ಕಲ್: ಮಸ್ಜಿದುನ್ನೂರ್ ಜುಮಾ ಮಸೀದಿಗೆ ಆಯ್ಕೆ
ಮುಹಮ್ಮದ್ ಶರೀಫ್ ಹಾಜಿ
ಸುರತ್ಕಲ್, ಜ.13: ಇಲ್ಲಿನ ಬದ್ರಿಯಾ ನಗರದ ಮಸ್ಜಿದುನ್ನೂರ್ ಜುಮಾ ಮಸೀದಿ ಮತ್ತು ಮುನೀರುಲ್ ಇಸ್ಲಾಂ ಮದ್ರಸದ ತುರ್ತು ಮಹಾಸಭೆಯು ಮಸ್ಜಿದುನ್ನೂರ್ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.
ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಹಾಜಿ, ಉಪಾಧ್ಯಕ್ಷರಾಗಿ ಬಶೀರ್, ಕಾರ್ಯದರ್ಶಿಯಾಗಿ ಮುಹಮ್ಮದ್ ಶಮೀರ್, ಜತೆ ಕಾರ್ಯದರ್ಶಿಯಾಗಿ ಮೊಹಿದಿನ್ ಶರೀಫ್, ಕೋಶಾಧಿಕಾರಿಯಾಗಿ ಶರೀಫ್ ಹಾಜಿ ಬದ್ರಿಯಾನಗರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾಸಿಮ್ ಕೆಸಿ.ರೋಡ್, ಕೆ.ಎಚ್. ನಝೀರ್, ಅಝೀಝ್ ಬದ್ರಿಯಾ ನಗರ, ಅಝೀಝ್ ಅಬ್ದುಲ್ಲ, ಫಾರೂಕ್, ಝೈನುದ್ದೀನ್, ಸಲಹಾ ಸಮಿತಿಯ ಸದಸ್ಯರಾಗಿ ಅಸ್ಲಂ, ಬಶೀರ್, ಹನೀಫ್, ರಫ್ತಾನ್ ಮುಸ್ಲಿಯಾರ್ ಅವರನ್ನು 2022ರ ಡಿಸೆಂಬರ್ವರೆಗೆ ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story