ಜಮಿಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಕಾಪು : ಜಮಿಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಯ ಕೇಂದ್ರ ಸಮಿತಿಗೆ ಮುಂದಿನ ಎರಡು ವರ್ಷಕ್ಕೆ ಆಯ್ಕೆ ಗೊಂಡ ಶಬೀಹ್ ಅಹ್ಮದ್ ಕಾಝಿಯವರನ್ನು, ಕಾಪು ತಾಲೂಕು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾಪು ತಾಲೂಕು ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಾಹೇಬ್, ಕೇಂದ್ರ ಸಮಿತಿಯ ನೂತನ ಅಧ್ಯಕ್ಷರನ್ನು ಬರಮಾಡಿಕೊಂಡು ಹೂ ಗುಚ್ಚ ನೀಡಿ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಇನ್ನು ಹೆಚ್ಚಿನ ಸೇವೆ ಸಮಾಜಕ್ಕೆ ಸಿಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಶಭೀ ಕಾಝಿಯವರು , ದ್ವಿ ಜಿಲ್ಲೆಯಲ್ಲಿ ಇರುವ ಎಲ್ಲಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿಯ ಬೇಡಿಕೆಗಳನ್ನು ಈಡೇರಿಸುವ ಹಾಗೂ ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ನಿರೂಪಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆಯಂದರು.
ಶಬ್ಬೀರ್ ಸಾಹೇಬ್ ಪಡುಬಿದ್ರಿ , ನಝಿರ್ ಅಹ್ಮದ್, ಸುಲೈಮಾನ್ , ನಸೀರ್ ಅಹ್ಮದ್ ಎಕ್ಕಾವನ್, ಮುಸ್ತಾಕ್ ಸಾಹೇಬ್ , ಸಿರಾಜ್ ಕಾಝಿ, ಶಾಬುದ್ದೀನ್ ಸಾಹೇಬ್ , ಇಬ್ರಾಹಿಂ ಸಾಹೇಬ್ , ಅನ್ವರ್ ಅಲಿ ಕಾಪು ಹಾಗೂ ಕಾರ್ಯದರ್ಶಿ ಸಾಬೀರ್ ಅಲಿ ಎರ್ಮಾಲ್ ಉಪಸ್ಥಿತರಿದ್ದರು.