ಜ.20ರಂದು ಕಾಂಗ್ರೆಸ್ನಿಂದ ರಾಜಭವನ ಮುತ್ತಿಗೆ: ಉಡುಪಿ ಜಿಲ್ಲೆಯಿಂದ 250 ಕಾರ್ಯಕರ್ತರು
ಉಡುಪಿ, ಜ.19: ಕೇಂದ್ರ ಸರಕಾರದ ರೈತ ವಿರೋಧಿ ಕರಾಳ ಕಾನೂನು ಗಳನ್ನು ಹಿಂಪಡೆಯಲು ಹಾಗೂ ರೈತರ ಬೇಡಿಕೆಗಳ ತ್ವರಿತ ಈಡೇರಿ ಕೆಗೆ ಒತ್ತಾಯಿಸಿ, ತೈಲ ಬೆಲೆ ಏರಿಕೆ ಹಿಂಪಡೆಯುವಂತೆ ಆಗ್ರಹಿಸಲು ನಾಳೆ ಜ.20ರ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿ ಕೊಂಡ ರಾಜಭವನ ಮುತ್ತಿಗೆ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು 250 ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Next Story