ಬೈಕ್ ಢಿಕ್ಕಿ : ಸ್ಕೂಟಿ ಸವಾರ ಮೃತ್ಯು
ಕಾರ್ಕಳ, ಜ. 20: ಅತೀ ವೇಗದಿಂದ ಬಂದ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಸವಾರ ಶ್ರೀಕಾಂತ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಶ್ರೀಕಾಂತ ಅವರು ತನ್ನ ಸ್ಕೂಟಿಯಲ್ಲಿ ರವೀಂದ್ರ ಪೂಜಾರಿ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಬೆಳ್ಮಣ್ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಸಾಗುತಿದ್ದಾಗ ರಾತ್ರಿ 7:45ರ ಸುಮಾರಿಗೆ ನೀರ್ಚಾಲು ಬಳಿ ಪಡುಬಿದ್ರೆ ಕಡೆಯಿಂದ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದಿತ್ತು.
ಇದರಿಂದ ಶ್ರೀಕಾಂತ ಹಾಗೂ ರವೀಂದ್ರ ಪೂಜಾರಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಗಾಯವಾದ ಶ್ರೀಕಾಂತ ಉಡುಪಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಎಡಕಾಲು ಮೂಳೆ ಮುರಿತಕ್ಕೊಳಗಾದ ರವೀಂದ್ರ ಒಳರೋಗಿಯಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story