ಟೆಂಪೊ ಢಿಕ್ಕಿ, ಸೈಕಲ್ ಸವಾರ ಮೃತ್ಯು
ಪಡುಬಿದ್ರಿ, ಜ.21: ಹಾಲನ್ನು ಡೈರಿಗೆ ಕೊಡಲು ಸೈಕಲ್ನಲ್ಲಿ ತೆರಳುತಿದ್ದ ವೃದ್ಧರೊಬ್ಬರಿಗೆ ಟೆಂಪೋ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ತೆಂಕ ಎರ್ಮಾಳಿನಲ್ಲಿ ಸಂಭವಿಸಿದೆ.
ಮೃತರನ್ನು ತೆಂಕ ಎರ್ಮಾಳಿನ ಶ್ಯಾಮ ಟಿ.ಪೂಜಾರಿ (70) ಎಂದು ಗುರುತಿಸಲಾಗಿದೆ. ಇವರು ಅಪರಾಹ್ನ 3:10ರ ಸುಮಾರಿಗೆ ಪಡುಬಿದ್ರಿ ಕಲ್ಸಂಕದಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಕೊಡಲು ಸೈಕಲ್ನಲ್ಲಿ ತೆರಳುತಿದ್ದಾಗ ಧೂಮಾವತಿ ದೈವಸ್ಥಾನದ ಎದುರು ಮಂಗಳೂರು ಕಡೆಯಿಂದ ವೇಗವಾಗಿ ಬಂದ ಟೆಂಪೊ ಢಿಕ್ಕಿ ಸೈಕಲ್ ಹಿಂಭಾಗಕ್ಕೆ ಹೊಡೆದಿತ್ತು.
ಇದರಿಂದ ಸೈಕಲ್ ಸವಾರ ಶ್ಯಾಮ ಪೂಜಾರಿ ಅವರು ಮಣ್ಣಿನ ರಸ್ತೆಗೆ ಎಸೆಯಲ್ಪಟ್ಟು ಉಂಟಾದ ಗಂಭೀರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story