ಜ.24: ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಶನ್ ವತಿಯಿಂದ ಆನ್ಲೈನ್ ಸಮ್ಮೇಳನ
ಮಂಗಳೂರು, ಜ.23: ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಶನ್ ಇದರ ವತಿಯಿಂದ ಎ.1,2,3,4ರಂದು ‘ಭಯಮುಕ್ತ ಜೀವನ: ಸುರಕ್ಷಿತ ಸಮಾಜ’ ಎಂಬ ಧ್ಯೇಯವಾಕ್ಯದಡಿ ಜರಗಲಿರುವ ಆನ್ಲೈನ್ ಸಮ್ಮೇಳನದ ಭಾಗವಾಗಿ ಜ.24ರಂದು ರಾತ್ರಿ 8:30ಕ್ಕೆ ಕನ್ನಡ ಆನ್ಲೈನ್ ಸಮ್ಮೇಳನ ನಡೆಯಲಿದೆ.
ಅಹ್ಲೆ ಹದೀಸ್ ವಿದ್ವಾಂಸ ಶೈಖ್ ಫೈಝಲ್ಲಾಹ್ ಮದನಿ ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕ ಯುಟಿ ಖಾದರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸಲಫಿ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಮೌಲವಿ ಇಜಾಝ್ ಸ್ವಲಾಹಿ, ಅಲ್ ಬಯಾನ್ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಹಫೀಝ್ ಸ್ವಲಾಹಿ, ಕೆಎಸ್ಎ ಮಂಗಳೂರು ಇದರ ದಾಇಗಳಾದ ಶಾಕಿರ್ ಉಳ್ಳಾಲ್, ಖಲೀಲ್ ತಲಪಾಡಿ ಉಪನ್ಯಾಸ ನೀಡಲಿದ್ದಾರೆ.
wisdom kannada ಫೇಸ್ಬುಕ್ ಪೇಜ್ ಮತ್ತು wisdommediachannel ಯೂಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮದ ನೇರ ಪ್ರಸಾರವಾಗಲಿದೆ ಎಂದು ಕರ್ನಾಟಕ ಸಲಫಿ ಅಸೋಸಿಯೇಶನ್ ಅಧ್ಯಕ್ಷ ಅಬ್ದುರ್ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story