ಉಡುಪಿ: ಫೆ.7ರಂದು ರೈತ ಸಮಾವೇಶ
ಉಡುಪಿ, ಜ.23: ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ರೈತ ಸಮಾವೇಶ-2021 ಇದೇ ಫೆ.7ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.25ರ ಸೋಮವಾರ ಸಂಜೆ 4:00 ಗಂಟೆಗೆ ಉಡುಪಿಯ ಹೋಟೆಲ್ ಉಡುಪಿ ರೆಸಿಡೆನ್ಸಿ ರೂಪ್ಟಾಪ್ ಸಭಾಂಗಣದಲ್ಲಿ ನಡೆಯಲಿದೆ.
ಯಕ್ಷ ಕಲಾರಂಗದ ಕಾರ್ಯದರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರು ಮತ್ತು ಕಟಪಾಡಿಯ ಉದ್ಯಮಿ ಸತ್ಯೇಂದ್ರ ಪೈ ರೈತ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಕೃಷಿಕ ಸಂಘ ಪ್ರಕಟಣೆ ಯಲ್ಲಿ ತಿಳಿಸಿದೆ.
Next Story