ಯೆನಪೋಯದಲ್ಲಿ ಪ್ರೋಸ್ತೊಡಾಂಟಿಸ್ಟ್ ದಿನಾಚರಣೆ
ಕೊಣಾಜೆ: ಯೆನೆಪೋಯ ದಂತ ಕಾಲೇಜಿನ ಪ್ರೋಸ್ತೊಡಾಂಟಿಸ್ಟ್ ವಿಭಾಗ ವತಿಯಿಂದ ಶುಕ್ರವಾರ ‘ಪ್ರೋಸ್ತೊಡಾಂಟಿಸ್ಟ್ ದಿನಾಚರಣೆಯು ನಡೆಯಿತು.
ಕಾರ್ಯಕ್ರಮವನ್ನು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶ್ರೀಪತಿ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರೋಸ್ತೊಡಾಂಟಿಸ್ಟ್ ವಿಭಾಗದಲ್ಲಿ ಕೃತಕ ಹಲ್ಲಿನ ವಿಶೇಷ ತರಬೇತಿ ಪಡೆದ ತಜ್ಞರಿದ್ದು, ಈ ತಜ್ಞರಿಂದ ಇಂದು ಸಮಾಜದ ಬಹಳಷ್ಟು ಜನರು ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಪುಟಗಳನ್ನು ಉದ್ಘಾಟಿಸಲಾಯಿತು. ಹಾಗೂ ಹಲ್ಲು ಇಲ್ಲದ ಹಿರಿಯರಿಗೆ ಉಚಿತವಾಗಿ ದಂತ ಪಂಕ್ತಿಗಳನ್ನು ವಿತರಿಸಲಾಯಿತು.
ಈ ದಿನದ ಅಂಗವಾಗಿ ಗಿಡವನ್ನು ನೆಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಮತ್ತು ಪೋಸ್ಟರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಖ್ತರ್ ಹುಸೈನ್, ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಶೆಟ್ಟಿ ಹಾಗೂ ದಂತ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story