ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ : ಬೈಕ್ ಸವಾರ ವಶಕ್ಕೆ
ಕೋಟ, ಜ.26: ಕೋಟ ಎಸ್ಸೈ ಹಾಗೂ ಸಿಬ್ಬಂದಿಗಳ ಕರ್ತವ್ಯ ಅಡ್ಡಿ ಪಡಿಸಿದ ಆರೋಪದಲ್ಲಿ ಬೈಕ್ ಸವಾರರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಸವಾರರನ್ನು ಹಳ್ಳಾಡಿ ಹರ್ಕಾಡಿ ನಿವಾಸಿ ಪ್ರಶಾಂತ ಎಸ್.(28) ಎಂದು ಗುರುತಿಸಲಾಗಿದೆ. ಕೋಟ ಎಸ್ಸೈ ಸಂತೋಷ್ ಬಿ.ಪಿ. ಜ.25ರಂದು ಸಿಬ್ಬಂದಿಯವರೊಂದಿಗೆ ಸಮವಸ್ತ್ರದಲ್ಲಿ ಚಿತ್ರಪಾಡಿ ಗ್ರಾಮದ ತಸ್ಮಯ ರೆಸಿಡೆನ್ಸಿ ಎದುರು ವಾಹನ ತಪಾಸಣೆ ಮಾಡುತ್ತಿರುವಾಗ ಪ್ರಶಾಂತ್ ವಾಹನ ನಿಲ್ಲಿಸಿ ಬಂದು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಲಾಗಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವಾಗ ಪ್ರತಿರೋಧ ವ್ಯಕ್ತ ಪಡಿಸಿದ ಪರಿಣಾಮ ಗಾಯಗಳಾಗಿವೆ ಎಂದು ದೂರಲಾಗಿದೆ. ಬಳಿಕ ಆರೋಪಿ ಹಾಗೂ ಆತನ ಬೈಕನ್ನು ಪೊಲೀಸರು ವಶಕ್ಕೆ ಪೆದುಕೊಂಡರು ಎಂದು ತಿಳಿದುಬಂದಿದೆ.
Next Story