ಕೆ.ಜೆ.ಬಾಬುರಾಜ್ ಗೆ ಇಂಡಿಯನ್ ಸೋಷಿಯಲ್ ಫೋರಂನಿಂದ ಅಭಿನಂದನೆ
ಬಹರೈನ್ : ಪ್ರವಾಸಿ ಭಾರತೀಯ ಸಮ್ಮಾನ್ ಪುರಸ್ಕಾರ ವಿಜೇತ ಕೆ.ಜೆ. ಬಾಬುರಾಜ್ ಅವರಿಗೆ ಇಂಡಿಯನ್ ಸೋಷಿಯಲ್ ಫೋರಂನಿಂದ ಅಭಿನಂದನೆ ಸಲ್ಲಿಸಲಾಯಿತು.
ಉದ್ಯಮಿ, ಬಿಕೆಜಿ ಹೋಲ್ಡಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಪ್ರವಾಸಿ ಭಾರತೀಯ ಸಮ್ಮಾನ ಪುರಸ್ಕಾರ ಪಡೆದ ಕೆ ಜೆ ಬಾಬುರಾಜನ್ ಅವರಿಗೆ ಇಂಡಿಯನ್ ಸೋಷಿಯಲ್ ಫೋರಂ ರಾಷ್ಟ್ರೀಯ ಸಮಿತಿ ಸದಸ್ಯರು ಅಭಿನಂದಿಸಿದರು.
ಬಹರೈನ್ ಪ್ರವಾಸಿಗರ ನಡುವೆ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ , ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂದಾಳುತ್ವ ವಹಿಸುತ್ತಿರುವ, ಲೋಕೋಪಕಾರಿ ಕ್ಷೇತ್ರದಲ್ಲಿ ಮುಂದಾಳುತ್ವ ವಹಿಸುವ ಬಾಬುರಾಜನ್ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ ಪುರಸ್ಕಾರ ಲಭಿಸಿರುವುದು ತುಂಬಾ ಸಂತೋಷದ ವಿಷಯ ಎಂದು ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಅಧ್ಯಕ್ಷರಾದ ಅಬ್ದುಲ್ ಜವಾದ್ ಪಾಷಾ ತಿಳಿಸಿದರು.
ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಿ, ಉಪಾಧ್ಯಕ್ಷ ಅಬ್ದುಲ್ ರಷೀದ್ ಮತ್ತು ಕೇಂದ್ರ ಸಮಿತಿ ಸದಸ್ಯರು ಹಾಗೂ ಕರ್ನಾಟಕ ಘಟಕದ ಅಧ್ಯಕ್ಷ ಇರ್ಫಾನ್ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.