ಬೆಳ್ತಂಗಡಿ: ಉಮಿಲಾಯಿ ಡ್ಯಾಮ್ನಲ್ಲಿ ಮುಳುಗಿ ಯುವಕ ಮೃತ್ಯು
ಬೆಳ್ತಂಗಡಿ, ಫೆ.1: ಮಾಲಾಡಿ ಗ್ರಾಮದ ಉಮಿಲಾಯಿ ಡ್ಯಾಮ್ನಲ್ಲಿ ಸ್ನಾನಕ್ಕಿಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿರುವುದು ವರದಿಯಾಗಿದೆ.
ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ. ಕುಂಞ ಮತ್ತು ದಿ. ಗುಲಾಬಿ ದಂಪತಿಯ ಪುತ್ರರಾದ ರವೀಂದ್ರ(20) ಮೃತಪಟ್ಟ ಯುವಕ.
ರವೀಂದ್ರ ಇಂದು ಉಮಿಲಾಯಿ ಡ್ಯಾಂ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಸ್ಥಳಕ್ಕೆ ಪೂಂಜಾಲಕಟ್ಟೆ ಠಾಣೆ ಪೊಲೀಸರು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story