ಕೋಟಿ ಚೆನ್ನಯ ಜನ್ಮಸ್ಥಳಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಿದ ಬಿಜೆಪಿ ನಾಯಕ ಜಗದೀಶ್ ಅಧಿಕಾರಿ
ಮೂಡುಬಿದಿರೆ: ಕೋಟಿ-ಚೆನ್ನಯ, ಬಿಲ್ಲವ ಸಮುದಾಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ ಗುರುವಾರ ಪುತ್ತೂರು ಪಡುಮಲೆಯಲ್ಲಿರುವ ಕೋಟಿ ಚೆನ್ನಯ ಜನ್ಮ ಸ್ಥಳಕ್ಕೆ ಭೇಟಿ ನೀಡಿ, ತಪ್ಪು ಕಾಣಿಕೆ ಹಾಕಿದರು.
ಕೆಲವು ದಿನಗಳ ಹಿಂದೆ ನಾನು ಕೋಟಿ ಚೆನ್ನಯ ಹಾಗೂ ಬಿಲ್ಲವರ ಬಗ್ಗೆ ಮಾತನಾಡಿದ್ದು, ಸಮಾಜದ ಬಂಧುಗಳಿಗೆ ನೋವಾಗಿದೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿದ್ದು, ನನ್ನಿಂದ ತಪ್ಪಾಗಿದೆ. ಬಿಲ್ಲವ ಸಮಾಜದವರಲ್ಲಿ ನಾನು ಕ್ಷಮೆಯನ್ನು ಯಾಚಿಸಿ, ನನ್ನಿಂದ ಆದ ತಪ್ಪಿಗೆ ಕೋಟಿ ಚೆನ್ನಯ, ದೇಯಿ ಬೈದತಿಗೆ ತಪ್ಪು ಕಾಣಿಕೆ ಹಾಕಿದ್ದೇನೆ. ಕಾರಣಿಕ ಪುರುಷರಾದ ಅವಳಿ ಪುರುಷರ ಅನುಗ್ರಹದಿಂದ ನಾವೆಲ್ಲರೂ ಸೌಹಾರ್ದತೆಯಿಂದ ಬದುಕೋಣ ಎಂದು ಹೇಳಿದರು.
Next Story