ಹೆಜಮಾಡಿ ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿ ರದ್ದು ವಿರೋಧಿಸಿ ಪ್ರತಿಭಟನೆ
ಪಡುಬಿದ್ರಿ, ಫೆ.17: ಹೆಜಮಾಡಿ ಟೋಲ್ಗೇಟ್ನಲ್ಲಿ ಪಡುಬಿದ್ರಿ, ಹೆಜ ಮಾಡಿ ಹಾಗೂ ಮೂಲ್ಕಿ ಪರಿಸರದ ವಾಹನಗಳಿಗೆ ನೀಡುತ್ತಿದ್ದ ವಿನಾಯಿತಿ ಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬುಧವಾರ ಹೆಜಮಾಡಿಯ ನವಯುಗ್ ಟೋಲ್ ಬಳಿ ಪ್ರತಿಭಟನೆ ನಡೆಸಿದವು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಇಂದಿನ ಆರ್ಥಿಕ ಮಗ್ಗಟ್ಟುವಿನ ಸಮಯದಲ್ಲಿ ಸರಕಾರ ಜನರಿಗೆ ಪಾಸ್ಟ್ಟ್ಯಾಗ್ ಕಡ್ಡಾಯ ಗೊಳಿಸುವ ಮೂಲಕ ಹೊರೆಯಾಗಿಸಿರುವುದು ಕಾನೂನು ಬಾಹಿರ. ಇಲ್ಲಿ ಹಿಂದೆ ನೀಡುವಂತೆ ಸ್ಥಳೀಯರ ವಾಹನಗಳಿಗೆ ವಿನಾಯಿತಿ ನೀಡಲೇಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್, ಕೆಪಿಸಿಸಿ ಸಂಯೋಜಕ ನವೀನ್ಚಂದ್ರ ಜೆ.ಶೆಟ್ಟಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ, ಇಕ್ಬಾಲ್ ಕಾರ್ನಾಡು, ಕೋಟೆ ಶೇಖಬ್ಬಹಾಜಿ, ಪವಿತ್ರಾ ಗಿರೀಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿ, ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಮತ್ತು ಪಡುಬಿದ್ರಿ ಗ್ರಾಪಂ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೆಸಿಡೆಂಟ್ ಇಂಜಿನಿಯರ್ ಮಲ್ಲಿಕಾರ್ಜುನ ಮತ್ತು ನವಯುಗ್ ಟೋಲ್ ಕಂಪನಿಯ ವ್ಯವಸ್ಥಾಪಕ ಶಿವ ಪ್ರಸಾದ್ ಶೆಟ್ಟಿಯವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಬಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ವಿವಿಧ ಸಂಘಟನೆಗಳ ಮುಖಂಡರುಗಳಾದ ರಮೀಝ್ ಹುಸೈನ್, ಪುತ್ತುಬಾವ, ಯೋಗೀಶ್ ಕೋಟ್ಯಾನ್, ವಿಶಾಲಾಕ್ಷಿ ಪುತ್ರನ್, ರವಿ ಶೆಟ್ಟಿ ಪಡುಬಿದ್ರಿ, ಧನಂಜಯ ಮಟ್ಟು, ಮಧು ಆಚಾರ್ಯ, ನವೀನ್ ಎನ್.ಶೆಟ್ಟಿ, ಲೋಕೇಶ್ ಅಮೀನ್, ಲಿಡಿಯಾ ಪುರ್ಟಾಡೋ, ರಾಲ್ಫಿ ಡಿಕೋಸಾತಿ, ಸುಧೀರ್ ಕರ್ಕೇರ, ಗಣೇಶ್ ಕೋಟ್ಯಾನ್, ಜೀವನ್ ಕೆ.ಶೆಟ್ಟಿ, ಶಶಿ ಅಮೀನ್, ದೇವಣ್ಣ ನಾಯಕ್, ಜಾನ್ ಕ್ವಾಡ್ರಸ್, ಅಬ್ದುಲ್ ಅಝೀಝ್, ಕಿಶೋರ್ ಸಾಲ್ಯಾನ್ ಮುಲ್ಕಿ ಉಪಸ್ಥಿತರಿದ್ದರು
ಬಸ್ ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ
ಹೆಜಮಾಡಿಯ ಒಳರಸ್ತೆಯಲ್ಲಿ ತೆರಳುವ ಸರ್ವಿಸ್ ಬಸ್ಗಳಿಗೆ ಫೆ.18ರಿಂದ ಟೋಲ್ ವಿನಾಯಿತಿ ನೀಡದಿದ್ದಲ್ಲಿ ಸಂಚಾರ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ಟೋಲ್ ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ಮಂಗಳೂರು ಮತ್ತು ಉಡುಪಿ ಕಡೆಯಿಂದ ಸಂಚರಿಸುವ ಬಸ್ಗಳು ಹೆಜಮಾಡಿ ಪೇಟೆಗೆ ತೆರಳದೆ ಟೋಲ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದರು. ಇದೇ ವೇಳೆ ಟೋಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಖಾಸಗಿ ಬಸ್ಗಳಿಗೆ ಒಳರಸ್ತೆಯ ಟೋಲ್ನಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.