ಉತ್ತಪ ಪ್ರದೇಶ ಸರ್ಕಾರದ ವಿರುದ್ಧ ಪಿಎಫ್ಐ ಪ್ರತಿಭಟನೆ
ಕುಂದಾಪುರ, ಫೆ.24: ಉತ್ತಪ ಪ್ರದೇಶ ಪೊಲೀಸರಿಂದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಅಪಹರಣ ವಿರೋಧಿಸಿ ಪಿಎಫ್ಐ ಕುಂದಾಪುರ ಘಟಕದ ನೇತೃತ್ವದಲ್ಲಿ ಬುಧವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಹೋರಾಟಗಾರ ಶಶಿಧರ ಹೆಮ್ಮಾಡಿ ಮಾತನಾಡಿ, ಇಂದು ಮೋದಿ ಸರಕಾರ ಭಿನ್ನಮತವನ್ನೇ ದೇಶದ್ರೋಹಿ ಎಂಬುದಾಗಿ ಬಿಂಬಿಸುತ್ತಿದೆ. ಮೋದಿ ವಿರುದ್ಧ ಆಗಲಿ ಸರಕಾರದ ವಿರುದ್ಧ ಆಗಲಿ ಯಾರು ಮಾತನಾಡುತ್ತಾರೆ ಅವರನ್ನು ದೇಶದ್ರೋಹಿಗಳು ಎಂದು ಬೊಟ್ಟು ಮಾಡಲಾಗುತ್ತಿದೆ. ಇದು ಬಹಳ ದೊಡ್ಡ ದುರಂತ. ಭಿನ್ನಮತ ಎನ್ನುವುದು ದೇಶದ್ರೋಹ ಅಲ್ಲ ಎಂದರು.
ಪಿಎಫ್ಐ ಮುಖಂಡ ಮಸೂದ್ ಚಂದಾವರ ಮಾತನಾಡಿದರು. ಪಾಪುಲರ್ ಫ್ರಂಟ್ ತಾಲೂಕ ಅಧ್ಯಕ್ಷ ಆಸಿಫ್ ಕೋಟೇಶ್ವರ, ಕಾರ್ಯದರ್ಶಿ ಲಿಯಾಕತ್ ಕಂಡ್ಲೂರು, ಉದ್ಯಮಿ ಬಿಎಸ್ಎಫ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
Next Story