ತೊಕ್ಕೊಟ್ಟು : ಪಿಎಫ್ಐ ಕಾರ್ಯಕರ್ತರ ಬಂಧನ ವಿರೋಧಿಸಿ ಪ್ರತಿಭಟನೆ
ಉಳ್ಳಾಲ : ಯುಪಿ ಪೂಲೀಸರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಹಾಗೂ ಕೆ.ಸಿ ರೋಡ್ ಜಂಕ್ಷನಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್ಐ ತಲಪಾಡಿ ವಲಯ ಸದಸ್ಯ ಲತೀಫ್ ಸಾಮಣಿಗೆ, ಕೇಂದ್ರ ಸರ್ಕಾರ ನೋಟ್ ಬ್ಯಾನ್ ಜಾರಿ ಮಾಡಿ ಜನರನ್ನು ಮೂಲೆ ಗುಂಪು ಮಾಡಿದೆ. ಇದರ ವಿರುದ್ಧ ಹೋರಾಟ ಮಾಡುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಂತಹ ಸಂಘಟನೆ =ಯ ಅಮಾಯಕ ಕಾರ್ಯಕರ್ತರನ್ನು ಯುಪಿ ಸರ್ಕಾರ ಬಂಧಿಸಿ ಅನ್ಯಾಯ ಎಸಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಎಫ್ ಐ ತಲಪಾಡಿ ವಲಯ ಕಾರ್ಯದರ್ಶಿ ಶಕೀಲ್, ಎಸ್ ಡಿಪಿಐ ವಲಯ ಅಧ್ಯಕ್ಷ ಇಮ್ರಾನ್, ಬಾವಾ ಇದ್ದಿಕುಂಞಿ, ಹಕೀಂ, ತನ್ಸೀರ್ ಅಹ್ಮದ್, ತಲಪಾಡಿ ಗ್ರಾ.ಪಂ. ಸದಸ್ಯ ಟಿ ಇಸ್ಮಾಯಿಲ್ ಉಪಸ್ಥಿತರಿದ್ದರು.
Next Story