ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ಗೆ ಸನ್ಮಾನ
ಮಂಗಳೂರು, ಫೆ. 24: ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಶನ್ನಿಂದ ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ರಫೀಕ್ ಮಾಸ್ಟರ್ ಅವರಿಗೆ ಇತ್ತೀಚೆಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಫೌಂಡೇಶನ್ನ ಅಧ್ಯಕ್ಷ ಅಬ್ದುಲ್ ಖಾದರ್ ಮುಸ್ಲಿಂ ಸಮುದಾಯದ ಜನರ ಗುಣಾತ್ಮಕ ಬದುಕಿಗೆ ಸಂಚಲನ ಮೂಡಿಸುವ ಕೆಲಸ ಮಾಡುತ್ತಿರುವ ರಫೀಕ್ ಮಾಸ್ಟರ್ರ ಶ್ರಮ ಶ್ಲಾಘನೀಯ ಎಂದರು.
ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ರಹ್ಮಾತಾಲಿ, ಕಣ್ಣೂರು ಎಜುಕೇಷನಲ್ ಟ್ರಸ್ಟಿನ ಸಿತಾರ್ ಮಜೀದ್ ಹಾಜಿ, ಉಪಾಧ್ಯಕ್ಷ ಅಬೂಬಕ್ಕರ್, ಪತ್ರಕರ್ತ ಇಕ್ಬಾಲ್ ಉಚ್ಚಿಲ ಉಪಸ್ಥಿತರಿದ್ದರು.
Next Story