ವಾರಸುದಾರರಿಗೆ ಸೂಚನೆ
ಉಡುಪಿ, ಫೆ.25:ಕುಂದಾಪುರ ಗಾಂಧಿ ಮೈದಾನದ ಬಳಿ ಫೆ.23ರಂದು ತೀವ್ರ ಜ್ವರದಿಂದ ಅಸ್ವಸ್ಥನಾಗಿದ್ದ, ಸುಮಾರು 30-35 ವರ್ಷ ಪ್ರಾಯದ ಶಿವಮೊಗ್ಗದ ಹಾಲೇಶ್ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಫೆ.24ರಂದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತ ಪಟ್ಟಿರುತ್ತಾರೆ.
ಮೃತ ಶರೀರವನ್ನು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಹಾಲೇಶ್ ಇವರ ಸರಿಯಾದ ವಿಳಾಸ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ. ಸಂಖ್ಯೆ: 08254-230338, ಪಿಎಸ್ಐ ಕುಂದಾಪುರ ಠಾಣೆ ಮೊ.ಸಂಖ್ಯೆ: 9480805455, ಸಿಪಿಐ ಕುಂದಾಪುರ ವೃತ್ತ ಮೊ.ಸಂಖ್ಯೆ: 9480805433 ಹಾಗೂ ಎಎಸ್ಪಿ ಕುಂದಾಪುರ ಮೊ.ನಂ: 9480805422 ಇವರಿಗೆ ಮಾಹಿತಿ ನೀಡುವಂತೆ ಕುಂದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story