ಕುಂದಾಪುರದಲ್ಲಿ ಹೊಸ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ
ಕುಂದಾಪುರ, ಫೆ.24: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ವತಿಯಿಂದ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿಯಿ ರುವ ಪಶು ವೈದ್ಯಕೀಯ ಇಲಾಖೆಯ ಅವರಣದಲ್ಲಿ ಹೊಸದಾಗಿ ನಂದಿನಿ ಕ್ಷೀರ ಮಳಿಗೆಯನ್ನು ಒಕ್ಕೂಟದ ಅಧಕ್ಷ ರವಿರಾಜ ಹೆಗ್ಡೆ ಕೊಡವೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಂದಾಪುರದ ಗ್ರಾಹಕರಿಗೆ ನಿರಂತರವಾಗಿ ಹಾಲು ಮತ್ತು ಹಾಲಿನ ಎಲ್ಲಾ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ದೊರೆಯುವ ಉದ್ದೇಶದಿಂದ ಹೊಸ ನಂದಿನಿ ಪಾರ್ಲರ್ನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ ಮಾತನಾಡಿ, ನಂದಿನಿ ಹಾಲು ಯಾವುದೇ ಕಲಬೆರಕೆ ಇಲ್ಲದ ಉತ್ತಮ ರೀತಿಯ ಪರಿಶುದ್ದ ಹಾಲಾಗಿದ್ದು, ಹಾಲಿನ ಸೇವನೆ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರು, ಕುಂದಾಪುರ ತಾಲೂಕಿನ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮತ್ತು ಒಕ್ಕೂಟದ ನಿರ್ದೇಶಕ ರಾದ ಜಗದೀಶ್ ಕಾರಂತ್, ಸ್ಮಿತಾ ಶೆಟ್ಟಿ ಹಾಗೂ ಕ್ಷೀರ ಮಳಿಗೆ ಗುತ್ತಿಗೆದಾರರಾದ ರಾಜು, ಹಾಗೂ ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು.