ಶ್ರೀಲಂಕಾ ಪ್ರಜೆ ಅಕ್ರಮ ವಾಸ : ಲಾಡ್ಜ್ ಮಾಲಕರ ವಿರುದ್ಧ ಪ್ರಕರಣ
ಉಡುಪಿ, ಫೆ. 26: ಶ್ರೀಲಂಕಾ ಪ್ರಜೆಗೆ ಅಕ್ರಮವಾಗಿ ತಂಗಲು ಅವಕಾಶ ನೀಡಿದ ಬನ್ನಂಜೆಯ ಲಾಡ್ಜ್ ಮಾಲಕರು, ಸ್ವಾಗತಕಾರ, ಮ್ಯಾನೇಜರ್ ವಿರುದ್ಧ ಉಡುಪಿ ನಗರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಂಜೆಯ ಲಾಡ್ಜ್ ಮಾಲಕಿ ಶುಭಲಕ್ಷ್ಮಿ ಎಸ್.ಪ್ರಭು, ಸ್ವಾಗತಕಾರ ವಸಂತ್ ನಾಯಕ್, ಮ್ಯಾನೇಜರ್ ಪ್ರಭಾಕರ ಎಂಬವರು ಶ್ರೀಲಂಕಾ ದೇಶದ ಪ್ರಜೆ ಯಾದ ಕನಿಲನ್ ನದರಾಝಾ (59) ಎಂಬವರಿಗೆ 2020ರ ನ.13ರಿಂದ ತಮ್ಮ ಲಾಡ್ಜ್ನಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದರು.
ವಿದೇಶಿ ಪ್ರಜೆ ತಂಗಿದ್ದ ಬಗ್ಗೆ ಸಿ ಫಾರ್ಮನ್ನು ಭರ್ತಿ ಮಾಡಿ ಪೊಲೀಸರಿಗೆ ಕಾನೂನು ಸಮ್ಮತವಾಗಿ ಮಾಹಿತಿಯನ್ನು ತಲುಪಿಸುವ ಬಗ್ಗೆ ನಿರ್ಲಕ್ಷ್ಯ ಮಾಡಿ ಅಪರಾಧ ಎಸಗಿರುವ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Next Story