ಕಾಸರಗೋಡು : ಮಾ.2ರಂದು ಇಂಧನ ಬೆಲೆ ಏರಿಕೆ ವಿರೋಧಿಸಿ ಮುಷ್ಕರ
ಕಾಸರಗೋಡು : ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಮಾರ್ಚ್ 2 ರಂದು ಕೇರಳದಲ್ಲಿ ವಾಹನ ಮುಷ್ಕರ ನಡೆಯಲಿದೆ. ವಾಹನ ಮಾಲಕರ ಹಾಗೂ ಕಾರ್ಮಿಕರ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ.
ಸಿಐಟಿಯು, ಐಎನ್ ಟಿಯುಸಿ , ಎಐಟಿಯುಸಿ ಮೊದಲಾದ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ. ಮಾರ್ಚ್ ಒಂದರಂದು ಪ್ರಮುಖ ಕೇಂದ್ರಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮತ್ತು ತೈಲ ಕಂಪೆನಿಗಳ ವಿರುದ್ಧ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ. ಮುಷ್ಕರ ಕ್ಕೆ ಖಾಸಗಿ ವಾಹನ ಮಾಲಕರು ಬೆಂಬಲ ನೀಡಬೇಕು . ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಎಲ್ಲಾ ವಲಯಗಳ ಮೇಲೆ ಪರಿಣಾಮ ಬೀರಿದ್ದು , ಮುಷ್ಕರದಲ್ಲಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳು ಸಂಚಾರ ಸ್ಥಗಿತಗೊಳಿಸಲಿದೆ ಎಂದು ಮೋಟಾರು ಉದ್ಯಮ ಸಂರಕ್ಷಣಾ ಸಮಿತಿ ಮುಖಂಡರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಿರಿಕೃಷ್ಣನ್, ಶರೀಫ್ ಕೊಡುವಂಜಿ , ಕೆ . ಗಿರೀಶ್ , ಪಿ . ಎ ಮುಹಮ್ಮದ್ ಕು೦ಞ ಮೊದಲಾದವರು ಉಪಸ್ಥಿತರಿದ್ದರು