ಅಂಗನವಾಡಿ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ
ಕುಂದಾಪುರ, ಮಾ.3: ಜೆಸಿಐ ಕುಂದಾಪುರ ಸಿಟಿ ಜೇಸಿರೇಟ್ ವಿಭಾಗ, ರೆಡ್ಕ್ರಾಸ್ ಸಂಸ್ಥೆ ಕುಂದಾಪುರ, ಆಯುಷ್ ಧಾಮ ಆಸ್ಪತ್ರೆ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಏರ್ಪಡಿಸ ಲಾಗಿತ್ತು.
ಶಿಬಿರವನ್ನು ಭಾರತೀಯ ಜೇಸಿಸ್ನ ವಲಯ 15 ಸಂಯೋಜಕ ಡಿ.ಲತಾ ಸುವರ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜೇಸಿರೇಟ್ ವಿಭಾಗದ ಚೇಯರ್ ಪರ್ಸನ್ ಡಾ.ಸೋನಿ ವಹಿಸಿದ್ದರು.
ವೇದಿಕೆಯಲ್ಲಿ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ವಲಯ ಸಂಯೋಜಕ ಪ್ರಶಾಂತ್ ಹವಾ ಲ್ದಾರ್, ಮನೀಶ್ ಆಸ್ಪತ್ರೆ ವೈದ್ಯ ಡಾ.ಪ್ರಮೀಳಾ ನಾಯಕ್, ಅಂಗನವಾಡಿ ಮೇಲುಸ್ತುವಾರಿ ಪ್ರಭಾವತಿ ಶೆಟ್ಟಿ, ಅಧ್ಯಕ್ಷೆ ಉಷಾ, ರೆಡ್ಕ್ರಾಸ್ ಸಂಸ್ಥೆಯ ಗಣೇಶ್ ಆಚಾರ್ಯ, ಆಯುಷ್ ಆಸ್ಪತ್ರೆ ಎಂ.ಡಿ.ವಿನಯ್ಚಂದ್ರ ಶೆಟ್ಟಿ, ಡಾ. ಸ್ವಾತಿ ಶೆಟ್ಟಿ, ಡಾ.ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು.ಮಬಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story