ಸಮಸ್ತ ಬಾಖವಿ ಉಲಮಾ ಒಕ್ಕೂಟ: ರಾಜ್ಯ ಸಮಿತಿ ರಚನೆ
ಪುತ್ತೂರು : ಸಮಸ್ತ ಬಾಖವಿ ಉಲಮಾ ಒಕ್ಕೂಟ ಕರ್ನಾಟಕ ಇದರ ಪ್ರಥಮ ಮಹಾ ಸಭೆ ಹಾಗೂ ನೂತನ ಸಮಿತಿ ರಚನಾ ಸಭೆ ಪುತ್ತೂರು ಬದ್ರಿಯಾ ಜುಮಾ ಮಸೀದಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ರಫೀಕ್ ಬಾಖವಿ ಅವರ ನೇತೃತ್ವದಲ್ಲಿ ಇಲ್ಲಿನ ಮಖಾಂ ಝಿಯಾರತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ದುಆಃ ಮತ್ತು ಅಧ್ಯಕ್ಷತೆಯನ್ನು ಉಸ್ತಾದ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ವಹಿಸಿದ್ದರು. ಹಮೀದ್ ಬಾಖವಿ ಉಸ್ತಾದ್ ಬೈರಿಕಟ್ಡೆ ಉದ್ಘಾಟಿಸಿದರು.
ರಫೀಕ್ ಬಾಖವಿ ಮಠ ವಿಷಯ ಮಂಡನೆ ಮಾಡಿದರು. ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಅಶ್ರಫ್ ಬಾಖವಿ ಚಾಪಲ್ಲ ಸವಣೂರು, ರಫೀಕ್ ಬಾಖವಿ ಮೂಡಬಿದ್ರೆ, ಅಬ್ದುಲ್ ಖಾದರ್ ಬಾಖವಿ ಕಂಬಳಬೆಟ್ಟು, ಫಾರೂಕ್ ಬಾಖವಿ ಬಂಟ್ವಾಳ, ಉಸ್ಮಾನ್ ರಾಝಿ ಬಾಖವಿ ಅಕ್ಕರಂಙಡಿ, ಮುಹಮ್ಮದ್ ಆರಿಫ್ ಬಾಖವಿ ಶೃಂಗೇರಿ ಕೊಪ್ಪ, ಮುಹಮ್ಮದ್ ರಫೀಕ್ ಬಾಖವಿ ಕೊಡಗು, ಅಬ್ದುಸ್ಸಮದ್ ಬಾಖವಿ ಮೂಡಿಗೆರೆ, ನೌಶಾದ್ ಬಾಖವಿ ಕೊಡಗು ಮಾತನಾಡಿದರು.
ನೂತನ ಸಮಿತಿ ರಚನೆ : ಗೌರವಾಧ್ಯಕ್ಷರು - ಅಲ್-ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಅಧ್ಯಕ್ಷರು- ಅಲ್-ಹಾಜ್ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಪ್ರ. ಕಾರ್ಯದರ್ಶಿ - ಮುಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಉಪಾಧ್ಯಕ್ಷರು - ಮುಹಮ್ಮದ್ ರಫೀಕ್ ಬಾಖವಿ ಮಠ, ಪೈವಳಿಕೆ, ಮುಹಮ್ಮದ್ ರಫೀಕ್ ಬಾಖವಿ ಕುಶಾಲನಗರ, ಅಬ್ದುಲ್ ಖಾದರ್ ಬಾಖವಿ ಕಂಬಳಬೆಟ್ಟು, ಕೋಶಾಧಿಕಾರಿ- ಮುಹಮ್ಮದ್ ರಫೀಕ್ ಬಾಖವಿ ಮೂಡಬಿದ್ರೆ, ಜೊತೆ ಕಾರ್ಯದರ್ಶಿ- ಅಬ್ದುಸ್ಸಮದ್ ಬಾಖವಿ ಮೂಡಿಗೆರೆ, ಮುಹಮ್ಮದ್ ಫಾರೂಕ್ ಬಾಖವಿ ಬಂಟ್ವಾಳ, ನೌಶಾದ್ ಬಾಖವಿ ಕೊಡಗು, ಸಂ. ಕಾರ್ಯದರ್ಶಿ- ಅಶ್ರಫ್ ಬಾಖವಿ ಚಾಪಲ್ಲ ಸವಣೂರು, ಮೀಡಿಯಾ ವಿಂಗ್- ಉಸ್ಮಾನ್ ರಾಝೀ ಬಾಖವಿ ಅಕ್ಕರಂಙಡಿ, ಆರಿಫ್ ಬಾಖವಿ ಕೊಪ್ಪ,ಶೃಂಗೇರಿ ಇವರುಗಳನ್ನು ನೇಮಿಸಲಾಯಿತು.