ಟೋಲ್ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡದಿದ್ದಲ್ಲಿ ಹೋರಾಟ: ಕಾಪು ಯುವ ಕಾಂಗ್ರೆಸ್
ಪಡುಬಿದ್ರಿ: ಸಾಸ್ತನ ಟೋಲ್ನಲ್ಲಿ ಜಿಲ್ಲಾ ಪಂಚಾಯತ್ನಲ್ಲಿ ವ್ಯಾಪ್ತಿಯಲ್ಲಿ ಸುಂಕ ವಿನಾಯಿತಿ ನೀಡಲಾಗಿದ್ದು ಅದೇ ರೀತಿ ಹೆಜಮಾಡಿ ಟೋಲ್ ನಲ್ಲಿಯೂ ಪಡುಬಿದ್ರಿ ಜಿ.ಪಂ. ವ್ಯಾಪ್ತಿ ಹಾಗು ಮುಲ್ಕಿ ತನಕ ಸ್ಥಳೀಯರಿಗೆ ಸುಂಕ ವಿನಾಯಿತಿ ನೀಡುವ ಬಗ್ಗೆ ಸರಿಯಾದ ತಿರ್ಮಾನ ತೆಗೆದು ಕೂಳ್ಳದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಯುವ ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ರಮೀಝ್ ಹುಸೈನ್ ಎಚ್ಚರಿಸಿದ್ದಾರೆ.
ಈಗಾಗಲೇ ಜನರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು, ಇದರ ಮಧ್ಯೆ ಟೋಲ್ ಸುಂಕ ನೀಡುತ್ತಿರುವುದು ನಮ್ಮ ದೌರ್ಭಾಗ್ಯ. ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡುವಲ್ಲಿ ನವಯುಗ ಕಂಪನಿಯು ದ್ವಂದ್ವ ನಿಲುವನ್ನು ಖಂಡಿಸುತ್ತೇವೆ. ಅದಲ್ಲದೇ ಟೋಲ್ ಸಿಬ್ಬಂದಿಗಳು ವಾಹನ ಚಾಲಕರೊಂದಿಗೆ ಗೂಂಡಾಗಿರಿ ವರ್ತನೆಯನ್ನು ತೋರ್ಪಡಿಸುತಿದ್ದಾರೆ ಎಂದರು.
Next Story