ಸ್ವರ್ಣ ನದಿಯಲ್ಲಿ ಮುಳುಗಿ ಇಸ್ರೋ ವಿಜ್ಞಾನಿ ಮೃತ್ಯು
ಕಾರ್ಕಳ, ಮಾ.4: ತಾಲೂಕಿನ ಎರ್ಲಪಾಡಿ ಗ್ರಾಮದ ಗೋವಿಂದೂರು ಎಂಬಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಬೆಂಗಳೂರು ಬಸವನಗುಡಿ ನಿವಾಸಿ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ರತ್ನಾಕರ ಎಸ್.ಪಿ.(63) ಇವರು ಬುಧವಾರ ಬೆಳಗ್ಗೆ ಆಶ್ರಮದ ಬದಿಯಲ್ಲಿರುವ ಸ್ವರ್ಣ ನದಿಯಲ್ಲಿ ಸ್ನಾನ ಮಾಡುವ ವೇಳೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬುಧವಾರ ಬೆಳಗ್ಗೆ 10ರ ಸುಮಾರಿಗೆ ಈ ಘಟನೆ ನಡೆದಿದ್ದು, ರತ್ನಾಕರರ ಮೃತ ದೇಹ ಸಂಜೆ 4 ಗಂಟೆಯ ವೇಳೆ ನದಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story