ಉಳ್ಳಾಲ: ಅಟೋ ರಿಕ್ಷಾ ನಿಲ್ದಾಣ ಉದ್ಘಾಟನೆ
ಉಳ್ಳಾಲ: ಅಭಿವೃದ್ಧಿ ಕಾರ್ಯ ನಮ್ಮ ಮೂಲ ಗುರಿ ಆಗಬೇಕು. ಅಧಿಕಾರ ಯಾವಾಗಲೂ ಶಾಶ್ವತವಲ್ಲ. ಅಧಿಕಾರದಲ್ಲಿರುವಾಗ ಮಾಡಿದ ಸಾಧನೆ ಗಳು ಶಾಶ್ವತ ಆಗಿರುತ್ತದೆ ಎಂದು ಶಾಸಕ ಯುಪಿ ಖಾದರ್ ಹೇಳಿದರು.
ಅವರು ಉಳ್ಳಾಲದಲ್ಲಿ ಅಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಅಟೋ ನಿಲ್ದಾಣ ಆಗಬೇಕು ಎಂಬುದು ಬಹಳ ಸಮಯ ದಿಂದ ಕಾಣುತ್ತಿದ್ದ ಕನಸು. ಅದೀಗ ಈಡೇರಿದೆ ಎಂದರು.
ಉಳ್ಳಾಲ ನಗರ ಸಭಾ ಅಧ್ಯಕ್ಷ ಚಿತ್ರ ಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಸ್ಮಾನ್ ಕಲ್ಲಾಪು, ಭಾರತಿ, ದರ್ಗಾ ಅಧ್ಯಕ್ಷ ರಶೀದ್ ಹಾಜಿ, ನಗರ ಸಭೆ ಕಮಿಷನರ್ ರಾಯಪ್ಪ, ಲಕ್ಷ್ಮಿಣಿ ಶೆಟ್ಟಿಗಾರ್, ಶೇಕಬ್ಬ, ಕುಂಞಿ ಮೋನು, ಯೂಸುಫ್, ಮುಸ್ತಫಾ ಅಬ್ದುಲ್ಲಾ, ಸೀತಾರಾಮ, ಅಶ್ರಫ್, ಜಬ್ಬಾರ್, ಮುಹಮ್ಮದ್ ಮುಕಚೇರಿ, ಸದಾನಂದ ಬಂಗೇರ, ಭಾಸ್ಕರ್ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್ ಹಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story