ಅಂದರ್ ಬಾಹರ್: ಐವರ ಬಂಧನ
ಬೈಂದೂರು, ಮಾ.12: ಶಿರೂರು ಗ್ರಾಮದ ಕರಿಕಟ್ಟೆ ಎಂಬಲ್ಲಿ ಮಾ.10 ರಂದು ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದ ಐದು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಮಾಸ್ತಿ ಸಂಕಯ್ಯ ಗೊಂಡ (55), ಮಹೇಶ ರಾಮ ನಾಯ್ಕ(32), ಮಂಜುನಾಥ ಗೊಂಡ(28), ಗಣೇಶ ರಾಘವೇಂದ್ರ ನಾಯ್ಕ (32), ರವಿ ಲಚ್ಮಯ್ಯು ನಾಯ್ಕ(38) ಬಂಧಿತ ಆರೋಪಿಗಳು. ಇವರಿಂದ 6900ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story