ಬೈಂದೂರು ಸಿಪಿಐಎಂ ಕಚೇರಿ ಉದ್ಘಾಟನೆ
ಬೈಂದೂರು, ಮಾ.14: ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಬೈಂದೂರು ವಲಯ ಸಮಿತಿ ಕಚೇರಿಯನ್ನು ಸಿಪಿಐಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ರವಿವಾರ ಉದ್ಘಾಟಿಸಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ರಾಜೀವ ಪಡುಕೋಣೆ ವಹಿಸಿದ್ದರು.
ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಡಿವೈಎಫ್ಐ ಮಾಜಿ ಮುಖಂಡ ಬಿ.ಶ್ರೀನಿವಾಸ ಹಳವಳ್ಳಿ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು ಉಪಸ್ಥಿತರಿದ್ದರು. ಸಿಪಿಐಎಂ ಮುಖಂಡ ಕಂಬದ ಕೋಣೆ ರಾಮ ವಂದಿಸಿದರು.
Next Story