ದ.ಕ ಜಿಲ್ಲಾ ಯಮಾನೀಸ್ ಸಂಗಮ ಅಧ್ಯಕ್ಷರಾಗಿ ಮುಸ್ತಫಾ ಯಮಾನಿ ಮೂಡುಬಿದಿರೆ ಆಯ್ಕೆ
ಮೂಡುಬಿದಿರೆ: ದ.ಕ ಜಿಲ್ಲಾ ಯಮಾನೀಸ್ ಸಂಗಮವು ಜಿಲ್ಲಾ ಯಮಾನೀಸ್ನ ಅಧ್ಯಕ್ಷ ರಶೀದ್ ಯಮಾನಿ ಕಡಬ ಇವರ ಅಧ್ಯಕ್ಷತೆಯಲ್ಲಿ ರಿಕ್ಷಾ ಭವನ ಬಿ.ಸಿ.ರೋಡಿನಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಎಸ್ಕೆಎಸ್ಎಸ್ಎಫ್ನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಉದ್ಘಾಟಿಸಿದರು. ಮುಸ್ತಫಾ ಯಮಾನಿ ಮುದರ್ರಿಸ್ ಮೂಡುಬಿದಿರೆ ಮುಖ್ಯ ಪ್ರಭಾಷಣಗೈದರು.
ಇದೇ ಸಂದರ್ಭದಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಮುಸ್ತಫಾ ಯಮಾನಿ ಮೂಡುಬಿದಿರೆ, ಉಪಾಧ್ಯಕ್ಷರಾಗಿ ರಫೀಕ್ ಯಮಾನಿ ಮತ್ತು ಆಸಿಫ್ ಯಮಾನಿ, ಪ್ರ.ಕಾರ್ಯದರ್ಶಿಯಾಗಿ ಝೈನುದ್ದೀನ್ ಯಮಾನಿ ಸೂಳ್ಯ, ಜತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಯಮಾನಿ ಮತ್ತು ಖಾಸಿಂ ಯಮಾನಿ, ಕೋಶಾಧಿಕಾರಿಯಾಗಿ ಅಶ್ರಫ್ ಯಮಾನಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುರಹ್ಮಾನ್ ಯಮಾನಿ ಮೀಡಿಯಾ ಕಾರ್ಯದರ್ಶಿಯಾಗಿ ನೌಶಾದ್ ಯಮಾನಿ ಬೀಟಿಗೆ ಇವರನ್ನು ಆಯ್ಕೆ ಮಾಡಲಾಗಿದೆ.
Next Story