ಎಸ್ಎಂಎ ತಲಪಾಡಿ ರೀಜನಲ್ ಕಮಿಟಿ ಮಹಾಸಭೆ
ತಲಪಾಡಿ, ಮಾ.22: ಎಸ್ಎಂಎ ತಲಪಾಡಿ ರೀಜನಲ್ ಕಮಿಟಿಯ ಮಹಾಸಭೆ ಹಾಗೂ ಆತೂರ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವು ಕೆ.ಸಿ.ರೋಡ್ ಮದ್ರಸ ಹಾಲ್ನಲ್ಲಿ ಇತ್ತೀಚೆಗೆ ಜರುಗಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಎಂ. ಅಬ್ಬಾಸ್ ಕೊಲಂಗರೆ, ಉಪಾಧ್ಯಕ್ಷರಾಗಿ ಮುನೀರ್ ಸಖಾಫಿ ಕೆಸಿ ರೋಡ್, ಅಬ್ದಲ್ಲ ಮದನಿ ಕೆ.ಸಿ. ರೋಡ್, ಉಮ್ಮರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ಮಸೂದ್ ಬಾಹಸನಿ, ಜೊತೆ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಸಖಾಫಿ, ಕೆ.ಎಂ. ಮುಹಮ್ಮದ್ ಫಾರೂಕ್, ಅಬ್ಬಾಸ್ ಪೂಮಣ್ಣು. ಕೋಶಾಧಿಕಾರಿಯಾಗಿ ರಹೀಂ ಕೋಟೆಕಾರ್ ಹಾಗೂ 35 ಮಂದಿಯನ್ನು ಕಾರ್ಯಕಾರಿ ಸದಸ್ಯರನ್ನಾಗಿ ಆರಿಸಲಾಯಿತು.
Next Story