ಸಾಸ್ತಾನ ಚರ್ಚ್ ಪಾಲನಾ ದಿವಸದ ಕ್ರೀಡಾಕೂಟ ಉದ್ಘಾಟನೆ
ಬ್ರಹ್ಮಾವರ, ಎ.4: ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾ ನೋತ್ಸವ ಪ್ರಯುಕ್ತ ಚರ್ಚ್ ಪಾಲನಾ ದಿವಸದ ಕ್ರೀಡಾಕೂಟವನ್ನು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ರವಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದಿನನಿತ್ಯದ ಜಂಜಾಟಗಳಿಂದ ಸದಾ ಒತ್ತಡದಲ್ಲಿರುವ ಜನರನ್ನು ಒಂದೆಡೆ ಸೇರಿಸಿ ಯಾವುದೇ ವಯೋಮಿತಿಗೆ ಕಡಿವಾಣ ಹಾಕದೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟ ಈ ಕ್ರೀಡಾಕೂಟ ಬಹಳ ಅರ್ಥಪೂರ್ಣವಾದುದು. ಕ್ರೀಡೆಗೆ ಎಲ್ಲಾ ಮನಸ್ಸುಗಳನ್ನು ಜೊತೆ ಯಾಗಿಸುವ ಶಕ್ತಿ ಇದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರು ವಂ.ಜಾನ್ ವಾಲ್ಟರ್ ಮೆಂಡೊನ್ಸಾ ವಹಿಸಿದ್ದರು. ಅತಿಥಿ ಧರ್ಮಗುರು ವಂ.ಲೆಸ್ಲಿ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲೂಯಿಸ್ ಡಿಸೋಜ, ಶತಮಾನೋತ್ಸವ ಆಚರಣ ಸಮಿತಿಯ ಸಂಚಾಲಕ ಡೆರಿಕ್ ಡಿಸೋಜ ಉಪಸ್ಥಿತರಿದ್ದರು.
ಕ್ರೀಡಾಕೂಟ ಆಯೋಜನಾ ಸಮಿತಿಯ ಸಂಚಾಲಕ ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story