ಮಂಗಳೂರು: ಶೇ.90ರಷ್ಟು ಸರಕಾರಿ ಬಸ್ಗಳ ಓಡಾಟ
ಮಂಗಳೂರು, ಎ.20: ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕೆಎಸ್ಸಾರ್ಟಿಸಿ ಬಸ್ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರೂ ಕೂಡ ದ.ಕ. ಜಿಲ್ಲೆಯಲ್ಲಿ ಮಂಗಳವಾರ ಶೇ.90ರಷ್ಟು ಬಸ್ ಸಂಚರಿಸಿದೆ.
ಮಂಗಳೂರು ವಿಭಾಗದ ಎರಡು ಡಿಪೋದಲ್ಲಿ ಮುಷ್ಕರದ ಮಧ್ಯೆಯೂ ಸಂಚರಿಸುವ ಬಸ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಿಬ್ಬಂದಿಗಳು ಕೂಡ ಅಧಿಕ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನಗರದಲ್ಲಿ 8ಕ್ಕೂ ಹೆಚ್ಚು ನರ್ಮ್ ಬಸ್ಗಳು ಓಡಾಡಿದೆ. ಮುಷ್ಕರದಿಂದ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಅಂದಾಜು ನಷ್ಟದ ಮೊತ್ತವೂ ಹೆಚ್ಚಾಗುತ್ತಿವೆ. ಈಗಾಗಲೆ 4 ಕೋ.ರೂ.ಗೂ ಅಧಿಕ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story