ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೋವಿಡ್ ಸಹಾಯ ಹಸ್ತ ತಂಡಕ್ಕೆ ಚಾಲನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೋವಿಡ್ ಸಹಾಯ ಹಸ್ತ ತಂಡಕ್ಕೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ ರವರ ಅಧ್ಯಕ್ಷತೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಎಐಸಿಸಿ ಕಾರ್ಯದರ್ಶಿ ಐವನ್ ಡಿ'ಸೋಜಾ, ಕಾರ್ಪೋರೇಟ್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಕೆ, ನವೀನ್ ಡಿಸೋಜ, ಅಬ್ದುಲ್ ರವೂಫ್, ಝಿನತ್ ಸಂಶುದ್ದೀನ್ ಬಂದರ್, ಜಿಲ್ಹಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಮುಖಂಡರಾದ ಸುಹೈಲ್ ಕಂದಕ್, ಅಶಿತ್ ಪಿರೇರಾ, ಸರ್ಫರಾಝ್ ಬಾಲ. ಸಬೀರ್ ಎಸ್ ಭಾಗವಹಿಸಿದರು.
ಪದಾಧಿಕಾರಿಗಳಾದ ನವಾಝ್ ನರಿಂಗಾನ, ಮುಫಿದ್, ರಂಜಿತ್ ಬಂಗೇರ, ಇಬ್ರಾಹಿಂ ನವಾಜ್, ಸಿದ್ದಿಕುಲ್ ಅಕ್ಬರ್, ನವಾಲ್ ಉಪ್ಪಿನಂಗಡಿ, ರೋಷನ್ ರೈ, ರಿಯಾಝ್ ಪುತ್ತೂರು, ಸೌಹಾನ್ ಎಸ್.ಕೆ., ಸಂಜನಾ ಛಲವಾದಿ, ಪ್ರವೀಣ್ ಗಾಣಿಗ, ಇಸ್ಮಾಯಿಲ್ ಸಿದ್ದೀಕ್, ಅರ್ಷಾದ್ ಕಿನ್ನಿಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಕೋವಿಡ್ ಮಾಹಿತಿ, ಹೋಂ ಕ್ವಾರಂಟೈನ್ ಮಾಹಿತಿ, ಕೋವಿಡ್ ಪರೀಕ್ಷಾ ಮಾಹಿತಿ, ಕೋವಿಡ್ ಲಸಿಕಾ ಕೇಂದ್ರದ ಮಾಹಿತಿ, ಬೆಡ್ ಲಭ್ಯವಿರುವ ಮಾಹಿತಿ, ಪ್ಲಾಸ್ಮ ಸಂಗ್ರಹ ಮಾಹಿತಿಯನ್ನು ಸಹಾಯಸ್ತ ನಂಬ್ರ 9901415505 ಮೂಲಕ ಸಂಪರ್ಕಿಸಬಹುದು.