ಜಾನುವಾರು ಹತ್ಯೆಗೆ ಯತ್ನ ಪ್ರಕರಣ : ಆರೋಪಿಗೆ ಜಾಮೀನು
ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಆರಂತಾಡಿ ಗುಡ್ಡ ಪ್ರದೇಶದಲ್ಲಿ ಮಾಂಸ ಮಾಡುವ ಉದ್ದೇಶದಿಂದ 9 ದನಗಳನ್ನು ಕಟ್ಟಿಹಾಕಲಾಗಿದ್ದ ಪ್ರದೇಶಕ್ಕೆ ಕೊಣಾಜೆ ಪೊಲೀಸರು ದಾಳಿ ನಡೆಸಿ ತೋಡಾರು ನಿವಾಸಿ ಹಂಝ (22) ಎಂಬಾತನನ್ನು ಬಂಧಿಸಿದ್ದರು.
ಎ. 28 ರಂದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಬಂಟ್ವಾಳ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿ ಪರ ಮಂಗಳೂರಿನ ಯುವ ನ್ಯಾಯವಾದಿ ಮೊಹಮ್ಮದ್ ಅನ್ಸಾರ್ ಮೂಲರಪಟ್ಣ ವಾದ ಮಂಡಿಸಿದ್ದರು.
Next Story