ತೂಫಾನ್ಗೆ ಸಿಲುಕಿದ ಎರಡು ಮೀನುಗಾರಿಕಾ ಬೋಟ್
ಮಂಗಳೂರು, ಮೇ 16: ಕೇರಳದ ಬೇಪೂರು ಮತ್ತು ಕಲ್ಲಿಕೋಟೆಯಿಂದ ಮೀನುಗಾರಿಕೆಗೆ ಹೊರಟಿದ್ದ ಎರಡು ಬೋಟ್ಗಳು ನಗರಕ್ಕೆ ಸಮೀಪದ ಅರಬಿ ಕಡಲಿನಲ್ಲಿ ರವಿವಾರ ತೂಫಾನ್ಗೆ ಸಿಲುಕಿದೆ ಎಂದು ತಿಳಿದು ಬಂದಿದೆ.
ಈ ಎರಡೂ ಬೋಟಿನಲ್ಲಿರುವ ಮೀನುಗಾರರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ಮೊನ್ನೆ ಮೀನುಗಾರಿಕೆಗೆ ಕೇರಳದಿಂದ ಹೊರಟಿದ್ದ ಈ ಬೋಟ್ಗಳು ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮಂಗಳೂರಿನತ್ತ ಸಾಗಿ ಬಂದಿದೆ ಎನ್ನಲಾಗಿದೆ. ದಡ ಸೇರಲು ಸಾಧ್ಯವಾಗದೆ ಇದೀಗ ಈ ಎರಡೂ ಬೋಟ್ ಮಂಗಳೂರಿಗೆ ಸಮೀಪದಲ್ಲೇ ಸಿಲುಕಿದ್ದು, ಅದರಲ್ಲಿದ್ದ ಮೀನುಗಾರರು ಸುರಕ್ಷಿತರಾಗಿದ್ದಾರೆ ಎಂದು ಶಾಸಕ ಪಿ.ಎ. ಮುಹಮ್ಮದ್ ರಿಯಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
Next Story