ಎಸ್ಡಿಎಂ ಆಯುಷ್ ಸಹಾಯವಾಣಿ
ಉಡುಪಿ, ಮೇ 17: ಕೋವಿಡ್-19 ಸಾಂಕ್ರಾಮಿಕ ರೋಗದ ಈ ದಿನಗಳಲ್ಲಿ ಕಂಡುಬರುತ್ತಿರುವ ಕೋವಿಡ್ ಹಾಗೂ ಇತರ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ತಜ್ಞ ವೈದ್ಯರು ದೂರವಾಣಿ ಮುಖಾಂತರ ಸಲಹೆ ಹಾಗೂ ಪರಿಹಾರಗಳನ್ನು ಸೂಚಿಸಲಿದ್ದಾರೆ.
ಆಸಕ್ತರು ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಾಯವಾಣಿಯ ಸಮಯ: ಬೆಳಗ್ಗೆ 9:00ರಿಂದ ಅಪರಾಹ್ನ 12:00 ರವರೆಗೆ. ಅಪರಾಹ್ನ 2 ರಿಂದ ಸಂಜೆ 5 ರವರೆಗೆ. ಸಹಾಯವಾಣಿ ಸಂಖ್ಯೆ: 7411918250.
Next Story