ಗುರುಪುರ: ಮಗುವಿನ ಚಿಕಿತ್ಸೆಗಾಗಿ ನೆರವು
ಗುರುಪುರ, ಜೂ.10: ವಿಶ್ವ ಹಿಂದೂ ಪರಿಷತ್-ಬಜರಂಗದಳ ವಜ್ರಕಾಯ ಮತ್ತು ಪಲ್ಲಿಪಾಡಿ (ಕರಿಯಂಗಳ) ಘಟಕವು ಚೇತನ್ ಮತ್ತು ದಿವ್ಯಾ ದಂಪತಿಯ ನಾಲ್ಕು ತಿಂಗಳ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಸಾಂತ್ವನ ಸೇವಾ ಯೋಜನೆಯಡಿ ರಚಿಸಲಾದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ದಾನಿಗಳ ಮೂಲಕ ಸಂಗ್ರಹಿಸಲಾದ 1,12,756 ರೂ.ವನ್ನು ಗುರುವಾರ ಅಶಕ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಊರಿನ ಹಿರಿಯರಾದ ಗುಣಪಾಲ ಶೆಟ್ಟಿ, ನಾಗರಾಜ ಭಟ್, ಗ್ರಾಪಂ ಸದಸ್ಯ ಕಿಶೋರ್ ಪಲ್ಲಿಪಾಡಿ, ವಿಹಿಂಪ ಘಟಕಾಧ್ಯಕ್ಷ ಚಂದ್ರಶೇಖರ, ಬಜರಂಗದಳ ಸಂಯೋಜಕರಾದ ಪ್ರೇಮನಾಥ ಕರಿಯಂಗಳ, ನಿತೇಶ್ ಕಂಡದಬೆಟ್ಟು ಉಪಸ್ಥಿತರಿದ್ದರು.
Next Story