ಗಾಳಿಮಳೆ: ಉಡುಪಿ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿ
ಉಡುಪಿ, ಜೂ.17: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎತ್ತ ಬೇರು ಗ್ರಾಮದಲ್ಲಿ ಮೇ 16ರಂದು ರಾತ್ರಿ ಮಳೆ-ಗಾಳಿಯಿಂದ ತಂಗಚ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೇ ರೀತಿ ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದ ರುಕ್ಮಿಣಿ ಎಂಬವರ ಜಾನುವಾರು ಕೊಟ್ಟಿಗೆ ಗಾಳಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿ 25ಸಾವಿರ ರೂ., ಉಪ್ಪುಂದ ಗ್ರಾಮದ ಕೇಶವ ಖಾರ್ವಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು 50ಸಾವಿರ ರೂ. ನಷ್ಟ ಉಂಟಾಗಿದೆ.
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಶ್ಯಾಮಲ ಸೇರಿಗಾರ ಎಂಬವರ ಮನೆ ಗಾಳಿಮಳೆಯಿಂದ ಹಾನಿಯಾಗಿ 12ಸಾವಿರ ರೂ. ನಷ್ಟವಾಗಿದೆ. ನಾಡ್ಪಾಲು ಗ್ರಾಮದ ಪ್ರಕಾಶ್ ಶೆಟ್ಟಿ ಎಂಬವರ ಮನೆಯ 150 ಅಡಿಕೆ ಮರ ಸಿಲಿಡಿಲಿಂದ ಭಾಗಶಃ ಹಾನಿಯಾಗಿದ್ದು, ಸುಮಾರು 20ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
Next Story