ಆಲೂರು: ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಕುಂದಾಪುರ, ಜೂ.17: ಉದ್ಯೋಗ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಆಲೂರು ಸುತ್ತಮುತ್ತಲಿನ ಆದಿವಾಸಿ ಸಮುದಾಯದವರಿಗೆ ಆಹಾರದ ಕಿಟ್ ಗಳನ್ನು ಇಂದು ವಿತರಿಸಲಾಯಿತು.
ಈ ಕುಟುಂಬಗಳು ಕೂಲಿ ಹಾಗೂ ಕುಲಕಸುಬು ಮಾಡಿ ಜೀವನ ನಡೆಸುತ್ತಿದ್ದು, ಇವರಲ್ಲಿ ಸಹ ಹಲವಾರು ಕುಟುಂಬಗಳು ಕೋವಿಡ್ ಪಾಸಿಟಿವ್ ಆಗಿ ಮನೆ ಸೀಲ್ಡೌನ್ ಮಾಡಲಾಗಿತ್ತು.. ಕೆಂಪುಕಲ್ಲು ಕೊರೆಯಲ್ಲಿ ಕೂಲಿ ಮಾಡಿ ಬದುಕುವ ಇವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹಿರಿಯ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ಮುಖಂಡ ರಾಜೇಶ್ ವಡೇರಹೋಬಳಿ, ಕೃಷಿ ಕೂಲಿಕಾರರ ಸಂಘದ ಮುಖಂಡ ನಾಗರತ್ನ ನಾಡ ಮತ್ತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಶ್ರೀಧರ್ ನಾಡ ಮತ್ತು ಗಣೇಶ ಆಲೂರು ಉಪಸ್ಥಿತರಿದ್ದರು.
Next Story